ಬಹಳ ಜನ ಮೈಸೂರಿಗೆ ಒಂದು ಟ್ರಿಪ್ ಹೋಗ್ತಾರೆ ಈ ಊರಲ್ಲಿರೋ ಒಂದು ಅರಮನೆ ಎರಡು ದೇವಸ್ಥಾನ, ಇಷ್ಟು ನೋಡ್ಕೊಂಡು ಮುಂದಿನ ಊರಿಗೆ ಹೋಗಿ ಉಳೀತಾರೆ. ದಸರಾ ಸಮಯಕ್ಕೆ ಬಿಟ್ಟು ಇಲ್ಲಿ ಪ್ರವಾಸೋದ್ಯಮವನ್ನು ನಂಬಿ ಬದುಕೋಕೆ ಸಾಧ್ಯವೇ ಇಲ್ಲ.
ಹಾ! ಇತ್ತೀಚೆಗೆ ಇಲ್ಲಿ ಕೆಲವು ಐಷಾರಾಮಿ ರೆಸಾರ್ಟ್/ಹೋಟೆಲ್ ಬಂದಿರೋದ್ರಿಂದ ಆಗಾಗ relax ಆಗೋಕ್ಕಂತ weekends ಇಲ್ಲಿಗೆ ಬೇರೆ ಊರುಗಳಿಂದ ಬಂದು, ಒಂದು ರಾತ್ರಿ ಪೂರ್ತಿ ಇದ್ದು, ಕುಡಿದು ಹೋಗ್ತಾರೆ. ಇಷ್ಟು ಸಾಕ ಒಂದು ಊರಿನ ಜನ ಬದುಕೋಕೆ?
ಮೂವತ್ತು ವರ್ಷ ಹಿಂದೆ ಹೋಗಿ ನೋಡಿ, ಇದ್ದ 3-4 ಕಂಪನಿಗಳು ಕೂಡ ಯೂನಿಯನ್ ಗಲಾಟೆ, ಲಾಕ್ಔಟ್ ಇದ್ರಲ್ಲೇ ಮುಗೀತು. ಮುಂದೆ ಒಂದೆರಡು ಕಂಪನಿಗಳು ಬಿಟ್ಟು ಇನ್ನ್ಯಾರೂ ಇಲ್ಲಿ ಹಣ ಹಾಕೋ ಸಾಹಸಕ್ಕೆ ಕೈಹಾಕಲಿಲ್ಲ. ಮೈಸೂರಿನಲ್ಲಿ ತುಂಬಾ ಒಳ್ಳೆ ಶಾಲಾ ಕಾಲೇಜುಗಳಿವೆ. ಇಲ್ಲಿ ಓದಿ ಹೊರಗೆ ಬರುವ engineer ಗಳ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಮುಂದೆ ಅವರೇನು ಮಾಡೋದು?
ಮೈಸೂರು ಸಿಟಿಯೊಳಗೆ ಹೊಲ ಗದ್ದೆ ಜಮೀನು ಅಂತೇನು ಇಲ್ಲ. ಪ್ರವಾಸೋಧ್ಯಮ ನಂಬಿ ಬದುಕುವ ಕಾಲ ಮುಗೀತು. ಸರ್ಕಾರಿ ನೌಕರಿ ಎಲ್ಲರಿಗೂ ಸಿಗೋಲ್ಲ. ಹೀಗಾಗಿ ಓದಿದ ಮಕ್ಕಳೆಲ್ಲ ಮನೆ ಬಿಟ್ಟು ಬೇರೆ ದೇಶಕ್ಕೆ ಹೋಗ್ತಾರೆ. ಇತ್ತೀಚೆಗಂತೂ, ಮೈಸೂರು ವೃದ್ಧಾಶ್ರಮ ಆಗ್ತಿದೆ.
ಮೈಸೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು, ಜೊತೆಗೆ ಉದ್ಯೋಗ ಕೂಡ ಕೊಡುವ ನಗರವಾಗಿ ಬೆಳೆಯಲಿ. ಹಾಗೆ ಮೈಸೂರಿನ MP ನಿರಂತರವಾಗಿ ಕೆಲಸ ಮಾಡುತ್ತಿರುವ ಹಾಗೆ ನೋಡಿಕೊಳ್ಳಬೇಕು, ಯಾಕಂದ್ರೆ ಕೆಲಸ ಮಾಡೋ MPಗಳು ಇರೋದು ಬಹಳ ಕಡಿಮೆ. connectivity ಮುಗೀತು, ಈಗ ಉದ್ಯೋಗ, ಪ್ರವಾಸೋಧ್ಯಮ ಬೆಳೆಯಬೇಕಿದೆ.
ಮೈಸೂರಿಗೆ ಈಗ ಬೇಕಿರೋದು ಕೆಲಸ ಕೊಡೊ ಸಂಸ್ಥೆಗಳು, ಬುದ್ದಿಜೀವಿಗಳಲ್ಲ. ಇನ್ನಷ್ಟು IT parkಗಳು ಬರಲಿ. ಈ ಬುದ್ದಿಜೀವಗಳನ್ನು ಎದುರಿಸಿ ಮೈಸೂರನ್ನು ಅಭಿವೃದ್ಧಿ ಮಾಡ್ತೀನಿ ಅನ್ನೋ ಒಬ್ಬ MP ಸಿಕ್ಕಿರೋದು ಮೈಸೂರಿಗೆ ವರವಾಗಿದೆ. ಮೈಸೂರಿನಲ್ಲಿ ಓದೋ ಮಕ್ಕಳಿಗೆ ಅಲ್ಲೇ ಕೆಲಸ ಸಿಗುವ ಹಾಗಾಗಲಿ.
ಪ್ರತಾಪ್ ಸಿಂಹ ತುಂಬಾ ಹೇಳ್ಕೊತಾರೆ ಅಂತೀರಾ, ಹೌದು ಯಾಕೆ ಅಂದ್ರೆ ಹೇಳ್ಕೊಳ್ಳೋಷ್ಟು ಕೆಲಸ ಮಾಡ್ತಾರೆ. ಅವರು ಹೀಗೆ ಕೆಲಸ ಮಾಡ್ತಿರ್ಲಿ, ಹೀಗೆ ಹೇಳಿಕೊಳ್ಳುತ್ತಿರಲಿ.✍️
#RSSTIMES