ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ದೇಶಾದ್ಯಂತ ಚುನಾಯಿತ ಸಂಸದರು ಮತ್ತು ಶಾಸಕರು ಸೋಮವಾರ ಮತ ಚಲಾವಣೆ ಮಾಡಿದ್ದಾರೆ. ರಾಜ್ಯದ ಇಬ್ಬರು ಸಂಸದರು ಇಂದು ವಿಧಾನಸೌಧದಲ್ಲಿ ಮತದಾನ ಮಾಡಲು ಪರ್ಮಿಶನ್ ಪಡೆದಿದ್ದಾರೆ. ಅನಾರೋಗ್ಯದ ಕಾರಣ ದೇವೆಗೌಡ, ಶ್ರೀನಿವಾಸ್ ಪ್ರಸಾದ್ ದೆಹಲಿಗೆ ತೆರಳಿಲ್ಲ. ಇಬ್ಬರು ಬೆಂಗಳೂರಿನಲ್ಲೇ ಮತದಾನ ಮಾಡಿದ್ದಾರೆ. ಕಳೆದ ಸಲ ಬಿಜೆಪಿ 17 ಮತಗಳು ಅಸಿಂಧುಗೊಂಡಿದ್ದ ಹಿನ್ನೆಲೆ ಈ ಬಾರಿ ಒಂದೇ ಒಂದು ಮತವೂ ಅಸಿಂಧುವಾಗದಂತೆ ಎಚ್ಚರ ವಹಿಸಲಾಗಿದೆ. ಕೇಸರಿ ಶಾಲು ಹಾಕಿಕೊಂಡು ಬಿಎಂಟಿಸಿ ಬಸ್ ನಲ್ಲಿ ಬಿಎಸ್ ವೈ ,ಸಿಎಂ ಬೊಮ್ಮಾಯಿ ಮತ್ತು ಕೆಲ ಸಚಿವರ ತಂಡ ಮತದಾನ ಮಾಡಲು ತೆರಳಿದ್ದರು.
ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆಗೆ ಮತದಾನ, ರಾಜ್ಯದ ಬಿಜೆಪಿ ನಾಯಕರಿಂದ ಹಕ್ಕು ಚಲಾವಣೆ. ಮತ ಅಸಿಂಧುವಾಗದಂತೆ ಎಚ್ಚರಿಕೆ
ದೇಶಕ್ಕೆ ನೂತನ ರಾಷ್ಟ್ರಪತಿ ಆಯ್ಕೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿರುವ ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಷ್ಟ್ರಪತಿ ಆಯ್ಕೆ ಹಿನ್ನೆಲೆ ಮತ ಚಲಾವಣೆ ಮಾಡುತ್ತಿರುವುದು.
ಕೇಸರಿ ಶಾಲು ಮತ್ತು ಟೋಪಿ ಧರಿಸಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ (prabhu chauhan) ಅವರು ಮತ ಚಲಾವಣೆ ಮಾಡಿರುವುದು.
ಸೊರಬ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ (Kumar Bangarappa) ಅವರು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಮತದಾನ.
ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿರುವುದು .
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್ ಅವರು ಕೇಸರಿ ಶಾಲು ಧರಿಸಿ ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಮತದಾನ ಚಲಾಯಿಸಿದರು.
#RSSTIMES