ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು
ಕೆರೆಯಲ್ಲಿ ಈಜಾಡಲು ಹೋಗಿದ್ದ ವಿದ್ಯಾರ್ಥಿ ಸಾವು. ತಾಲೂಕಿನ ಮಾಲೆಕಲ್ಲು ತಿರುಪತಿಯ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಸಣ್ಣ ಕೆರೆಯಲ್ಲಿ ಮೆಟ್ರಿಕ್ ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ನಿತಿನ್ ಎಂಬ 15 ವರ್ಷದ ಅಂಗವಿಕಲ ವಿದ್ಯಾರ್ಥಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ
ಇಂದು ಬೆಳಿಗ್ಗೆ ವಸತಿ ನಿಲಯದಲ್ಲಿ ತಿಂಡಿ ತಿಂದ ನಂತರ ಶಾಲೆಗೆ ಹೋಗುವುದಾಗಿ ಸುಮಾರು 5 ವಿದ್ಯಾರ್ಥಿಗಳು ತೆರಳಿದ್ದಾರೆ ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಎರಡು ಕಿಲೋಮೀಟರ್ ದೂರದಲ್ಲಿರುವ ಮಾಲೆಕಲ್ಲು ತಿರುಪತಿಯ ರಾಯನ ಕಟ್ಟೆ ಕೆರೆಯಲ್ಲಿ ಈಜಲು ಹೋಗಿದ್ದಾರೆ ಅಂಗವಿಕಲನಾಗಿದ್ದ ನಿತಿನ್ ಈಜಲು ನೀರಿಗೆ ಇಳಿದಾಗ ಕಾಲು ಕೆಸರೊಳಗೆ ಸಿಕ್ಕಿಹಾಕಿಕೊಂಡಿದ್ದರಿಂದ ಮುಳುಗಿದ್ದಾನೆ ತಕ್ಷಣ ಉಳಿದ ವಿದ್ಯಾರ್ಥಿಗಳು ಸ್ಥಳೀಕರು ಸೇರಿ ಅಗ್ನಿಶಾಮಕ ದಳದವರನ್ನು ಕರಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ..
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್.. ಸಬ್ ಇನ್ಸ್ಪೆಕ್ಟರ್ ಲಕ್ಷ್ಮಣ್ ಪೊಲೀಸ್ ಸಿಬ್ಬಂದಿಗಳಾದ ಹರೀಶ್ ಮಂಜು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
#RSSTIMES