ರಾಜ್ಯದಲ್ಲಿ MES ನಿಷೇಧಿಸಿ ! ವಿಕೃತಿ ಮೆರೆದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಲು ಜಮಖಂಡಿಯ ಕನ್ನಡ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಗರದ ದೇಸಾಯಿ ವೃತ್ತದಲ್ಲಿ ನಡೆಯಿತು.
ಆದಿಗುರು ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಮಶಿ ಬಳೆದು, ಮೂರ್ತಿಗಳನ್ನು ವಿಘ್ನಗೊಳಿಸಿದ MES ಪುಂಡರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟುಹಾಕಿದ ಮತ್ತು ಸುಟ್ಟು ಹಾಕಲು ಕುಮ್ಮಕ್ಕು ನೀಡುತ್ತಿರುವವರನ್ನು ಬಂಧಿಸದಿದ್ದರೆ MES ನಿಷೇಧಿಸದಿದ್ದರೆ ಇನ್ನೆರಡು ದಿನಗಳಲ್ಲಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ/ನೀಯರು, ರಾಜಕಾರಣಿಗಳು, ವಿವಿಧ ಕನ್ನಡಪರ ಸಂಘಟನೆಗಳ ಸರ್ವ ಸದಸ್ಯರೆಲ್ಲರೂ ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ MES ನಿಷೇಧಿಸಲು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಪ್ರಮುಖರಾದ ಹಾಗೂ ಮುಂದಾಳತ್ವ ವಹಿಸಿದ ಮಂಜುನಾಥ ಜಕ್ಕಪ್ಪನವರ, ನರೇಂದ್ರ ಮಾನೆ, ಉಪಸ್ಥಿತಿ -ಸಿದ್ದು ಮೀಶಿ, ಬಸವರಾಜ ನ್ಯಾಮಗೌಡ, ಗಣೇಶ ಶಿರಗಣ್ಣವರ, ಸಿದ್ದು ಮೀಶಿ, ಸುನೀಲ ಭೋವಿ, ಶಂಕರ ಕಾಳೆ, ವಿಠ್ಠಲ ಪರೀಟ, ವಿನೋದ ಬಿರಾದಾರ, , ರಾಯಬಾ ಜಾಧವ, ಪ್ರದೀಪ ಮೆಟಗುಡ್ಡ, ರಾಹುಲ್ ಕಲೂತಿ, ಪ್ರಕಾಶ ಅರಕೇರಿ, ರುದ್ರಯ್ಯ ಕರಡಿ, ನಿಖಿಲ ನ್ಯಾಮಗೌಡ, ನವೀನ ಕಲುತಿ,ಶ್ರೀಧರ ಕಂಬಿ ಸೇರಿದಂತೆ ಸಾವಿರಕ್ಕೂ ಅಧಿಕ ಕನ್ನಡ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.