1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರವು ಪ್ರತಿ ವರ್ಷ ಡಿಸೆಂಬರ 16ರಂದು #ವಿಜಯ್_ದಿವಸ್ ಅನ್ನು ಆಚರಿಸುತ್ತದೆ3 ಡಿಸೆಂಬರ್ 1971ಕ್ಕೆ ಪ್ರಾರಂಭವಾದ ಪಾಕ ಮತ್ತು ಭಾರತದ ನಡುವಿನ ಯುಧ್ಧ 16 ಡಿಸೆಂಬರ್ ರಂದು ಕೊನೆಗೊಂಡು, ಕೇವಲ 13 ದಿನಗಳಲ್ಲಿ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು.ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆಗೆ ಬೇಷರತ್ತಾಗಿ ಶರಣಾದರು..ಜಾಗತಿಕ ಮಿಲಿಟರಿ ಇತಿಹಾಸದಲ್ಲಿ ಈವರೆಗೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ವೈರಿ ದೇಶದ ಸೈನಿಕರು ಶರಣಾದದ್ದು ಇದೇ ಮೊದಲಾಗಿದೆಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಾಳಿತು…ತಾಯ್ನಾಡಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದರೊಂದಿಗೆ, ಎಂತಹ ಪ್ರತಿಕೂಲ ಸನ್ನಿವೇಶವನ್ನೂ ಲೆಕ್ಕಿಸದೇ, ನಿರಂತರವಾಗಿ ಗಡಿ ರಕ್ಷಣೆಯಲ್ಲಿ ನಿಂತಿರುವ, ನೈಸರ್ಗಿಕ ಪ್ರಕೋಪದಂತಹ ತುರ್ತು ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನಾಗರಿಕರ ರಕ್ಷಣೆಗೆ ಧಾವಿಸುವ ದೇಶದ ಸೇನಾಪಡೆಗಳ ಪ್ರತಿಯೊಬ್ಬ ಯೋಧನೂ ಭಾರತೀಯರಿಗೆ ಹೆಮ್ಮೆ.ಭಾರತ – ಪಾಕ್ ಯುದ್ಧದಲ್ಲಿ ತಮ್ಮ ಪ್ರಾಣ ಅರ್ಪಿಸಿದ ಭಾರತದ ಹುತಾತ್ಮ ಯೋಧರಿಗೆ ಈ ದಿನದಂದು ಗೌರವ ನಮನಗಳನ್ನು ಸಲ್ಲಿಸೋಣ…#ವಂದೆ_ಮಾತರಂ