500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಜಾತ್ರೆಯಲ್ಲಿ ಕಾಲಜ್ಞಾನವನ್ನು ಓದಲಾಗುತ್ತದೆ.
ವಿಜಯಪುರ 27: ತಿರುಪತಿಯಲ್ಲಿ ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಮುಂಚೆಯೇ ಬಬಲಾದಿ ಸದಾಶಿವಮುತ್ಯಾರ ಮಠದ (Babaladi Sadashiv Mutya mutt) ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಬಬಲಾದಿ ಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೋಳಿಮಠ ನುಡಿದ ಕಾಲಜ್ಞಾನ ಈಗ ನಿಜವಾಗಿದೆ. ಕಳೆದ ಶಿವರಾತ್ರಿ ಜಾತ್ರೆ ವೇಳೆ ಆಂಧ್ರ-ತೆಲಗು ರಾಜ್ಯಕ್ಕೆ ಕೇಡು ಎಂದು ಮೊದಲೇ ಸ್ವಾಮೀಜಿ ಕಾಲಜ್ಞಾನ ಭವಿಷ್ಯ ಹೇಳಿದ್ದರು. ಆಂಧ್ರ ಪ್ರದೇಶಕ್ಕೆ, ತೆಲಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಇದೆ ಎಂದು ತಿಳಿಸಿದ್ದರು. ಸಾಮಾಜಿಕ ತಾಲತಾಣದಲ್ಲಿ ಸ್ವಾಮೀಜಿ ನುಡಿದಿರುವ ಕಾಲಜ್ಞಾನ ಈಗ ವೈರಲ್ ಆಗಿದೆ.
ಪುನೀತ್ ಸಾವಿನ ಬಗ್ಗೆಯೂ ಮುಂಚೆಯೇ ಭವಿಷ್ಯ ನುಡಿದಿತ್ತಾ ಬಬಲಾದಿ ಮಠ?
ಓರ್ವ ಗಣ್ಯ ವ್ಯಕ್ತಿಯ ಏರಿಳಿತವಾಗುತ್ತದೆ ಎಂದು ಸ್ವಾಮೀಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದರಂತೆ ನಟ ಪುನೀತ್ ರಾಜ್ ಕುಮಾರ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆಯೂ ಈಗ ಮಾತುಗಳು ಕೇಳಿಬರುತ್ತಿದೆ. ಇನ್ನು ಸಿಎಂ ಬದಲಾವಣೆ ಬಗ್ಗೆ, ರಾಜಕೀಯ ವ್ಯಕ್ತಿಯ ಏರಿಳಿತ ಎಂದು ಸ್ವಾಮೀಜಿ ಹೇಳಿದ್ದರು. ಅದರಂತೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ, ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಬಬಲಾದಿ ಕಾಲಜ್ಞಾನದಲ್ಲಿ ಉಲ್ಲೇಖವಾಗಿತ್ತು. ಆ ಪ್ರಕಾರ ರಾಜಕೀಯದಲ್ಲಿ ಒಂದೇ ಪಕ್ಷದ ನಾಯಕರಗಳ ನಡುವೆ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಸ್ವಾಮೀಜಿ ಸಿದ್ದರಾಮಯ್ಯ ಹೋಳಿಮಠ ನುಡಿದಿದ್ದರು. ಈ ಭವಿಷ್ಯ ಕೂಡ ನಿಜವಾಗಿದೆ. ಅಲ್ಲದೇ ಅಮೇರಿಕಾ, ಇರಾನ್-ಇರಾಕ್ ದೇಶಗಳಿಗೆ ಕೇಡು ಎಂದು ಬಬಲಾದಿ ಶ್ರೀಗಳು ಹೇಳಿದ್ದರು. ಈಗಾಗಲೇ ತಾಲಿಬಾನ್ ಅಘ್ಪಾನಿಸ್ತಾನ್ ಮತ್ತು ಅಮೇರಿಕಾಕ್ಕೆ ಸಂಚಲನ ಉಂಟುಮಾಡಿದೆ. ಬಬಲಾದಿಯ ಕಾಲಜ್ಞಾನ ಎಂದೂ ಸುಳ್ಳಾಗಲ್ಲಾ ಎಂಬ ಭಕ್ತರು ಹೇಳಿದ್ದಾರೆ.