ಜಮಖಂಡಿ 15 : ತ್ರೀಕಾಲ ಜ್ಞಾನಿ ಸದಾಶಿವ ಮುತ್ಯಾ ದೇವರು ಸದಾಕಾಲ ಜಾಗೃತ ದೇವರಾಗಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಹೊರವಲಯದ ಕುಂಚನೂರ ರಸ್ತೆಯಲ್ಲಿರುವ ಸದಾಶಿವ ಕಾಲನಿಯಲ್ಲಿ ಸದಾಶಿವ ಚಂದ್ರಗಿರಿಬಬಲಾದಿ ಶಾಖಾ ಮಠದ ಭೂಮಿ ಪೂಜೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಮಠದ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಗಿರೀಶಾನಂದ ಮಹಾರಾಜರು, ಯಲ್ಲಟ್ಟಿಯ ಚೇತನ ಮಹಾರಾಜರು ಸಾನ್ನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ನಗರಸಭೆ ಅಧ್ಯಕ್ಷ ಸಿದ್ದು ಮಿಸಿ, ಬಿಜೆಪಿ ಮುಖಂಡ ಸಿ.ಟಿ.ಉಪಾದ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಪಕೀರಸಾಬ ಬಾಗವಾನ, ತಹಸೀಲ್ದಾರ ಪ್ರಶಾಂತ ಚನಗೊಂಡ, ಪ್ರದೀಪ ಮೆಟಗುಡ್ಡ ಇತರರು ಇದ್ದರು.