ಕನ್ನಡ ಚಿತ್ರರಂಗದ ಮಿನುಗುವ ನಕ್ಷತ್ರ ಪವರ್ ಸ್ಟಾರ್ ಕಾಣದಂತೆ ಮಾಯವಾಗಿದೆ. ಇಂದು ಬೆಳಗ್ಗೆ ಅಪ್ಪು ಅವರನ್ನು ಶಾಶ್ವತವಾಗಿ ಅವರ ತಂದೆ ತಾಯಯ ಪಕ್ಕದಲ್ಲಿ ಮಲಗಿಸಲಾಗಿದೆ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅವರ ಅಂತ್ಯ ಕ್ರಿಯೆಗಳು ಸರ್ಕಾರದ ಗೌರವಗಳೊಂದಿಗೆ ನೆರವೇರಿತು. ರಾಜ್ಯ ಸರ್ಕಾರವು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ, ಶಾಂತಿಯುತವಾಗಿ ಅಪ್ಪು ಅವರನ್ನು ಕಳಿಸಿಕೊಡಲಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ಧೈರ್ಯ ಕೊಡಲಿ ಎನ್ನುವುದೇ ಎಲ್ಲರ ಆಶಯ.
ಆ ಕೊನೆಯ ಸಮಯದಲ್ಲಿ ಅಪ್ಪು ಅವರ ಕುಟುಂಬದವರು ಮತ್ತು ಹೆಂಡತಿ ಮಕ್ಳಳ ನೋವನ್ನು ನೋಡುವುದು ಬಹಳ ಕಷ್ಟವಾಗಿತ್ತು. ಇಬ್ಬರು ಹೆಣ್ಣುಮಕ್ಳಳು ಅಳುತ್ತಿರುವುದು, ತಮ್ಮನ ಮುಂದೆ ಶಿವ ರಾಜ್ ಕುಮಾರ್ ಅವರು ಅಳುತ್ತಾ ನಿಂತಿದ್ದು ನೋಡಿ, ಎಲ್ಲರಿಗೂ ದೇವರ ಮೇಲೆ ನಂಬಿಕೆಯೇ ಹೋದ ಹಾಗೆ ಆಗಿದೆ. ಇಂತಹ ಒಳ್ಳೆಯ ವ್ಯಕ್ತಿಗೆ, ಇಷ್ಟು ಚಿಕ್ಕ ವಯಸ್ಸಿಗೆ ಅಪ್ಪು ಅವರಿಗೆ ಈ ರೀತಿಯ ಸಾ.ವು ಬರುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಅಭಿಮಾನಿಗಳಿಗೆ ಮತ್ತು ಸ್ನೇಹ ಬಳಗಕ್ಕೆ ಈ ರೀತಿ ಭಾವನೆಗಳು ಮೂಡುತ್ತಿವೆ ಎಂದರೆ ಇನ್ನು ಕುಟುಂಬದವರಿಗೆ ಯಾವ ರೀತಿ ಅನ್ನಿಸುತ್ತದೆ ಎಂದು ಊಹಿಸಿಕೊಳ್ಳುವುದು ಸಹ ಕಷ್ಟ.
ಚಿತ್ರರಂಗದ ಎಲ್ಲರೂ ಅಪ್ಪು ನಿ.ಧ.ನ.ದಿಂ.ದ ಬಹಳ ಅಪ್ಸೆಟ್ ಆಗಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರರಂಗದ ನಟ ವಿಶಾಲ್ ಅವರು ಅಪ್ಪು ಅವರು ಓದಿಸುತ್ತಿದ್ದ, 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದರು. ಇದೀಗ ನಟ ದರ್ಶನ್ ಅವರು ಸಹ ಅಪ್ಪು ಅವರ ಬಗ್ಗೆ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ, ಅದರ ವಿಚಾರವಾಗಿ ನಟ ದರ್ಶನ್ ಅವರು ಈಗ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡು ಅದನ್ನು ಹಂಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಗೋಶಾಲೆ ಮತ್ತು ಅನಾಥಾಶ್ರಮದ ಜವಾಬ್ದಾರಿ ತಮ್ಮದು ಎಂದು ಹೇಳಿದ್ದಾರೆ ನಟ ದರ್ಶನ್. ದರ್ಶನ್ ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಅಪ್ಪು ಅವರ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ.