ಜಮಖಂಡಿ: ಕನ್ನಡರಾಜ್ಯೋತ್ಸವ ದಿನದಂದು ಭೂವನೇಶ್ವರಿ ಅವರ ಭಾವಚಿತ್ರದ ಮೆರವಣಿಗೆಯನ್ನು ಹೊರತು ಪಡಿಸಿ ಕೋವಿಡ-೧೯ ನಿಯಮಾವಳಿ ಪ್ರಕಾರ ಅತೀ ಸರಳವಾಗಿ ಆಚರಿಸಬೇಕು. ಮೆರವಣಿಗೆ ಕುರಿತು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸುವದಾಗಿ ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.
ನಗರದ ಮಿನಿ ವಿಧಾನ ಸೌಧದಲ್ಲಿ ಸಭಾ ಭವನದಲ್ಲಿ ನಡೆದ ಕನ್ನಡರಾಜ್ಯೋತ್ಸೋವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಯಾವುದೇ ಜಯಂತಿಯ ಕಾರ್ಯಕ್ರಮಗಳ ಮೆರವಣಿಗೆಯನ್ನು ಮಾಡದೇ ಸರಳವಾಗಿ ಆಚರಿಸುದಾಗಿ ತಿಳಿಸಿದ ಹಿನ್ನಲೆಯಲ್ಲಿ ಕನ್ನಡ ಸಂಘದ ಸಂಘಟನೆ ಪದಾಧಿಕಾರಿಗಳು ಪಾಲಿಸಬೇಕು ಎಂದರು.
ಸAಘನೆಯ ಸಂತೋಷ ಚನ್ನಾಳ ಮಾತನಾಡಿ, ನಗರದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಯಾವುದೇ ನಿಮಾವಳಿಗಳು ಅನುಸರಿಸದೆ ಎಲ್ಲವೂ ನಡೆಯುತ್ತಾ ಇದ್ದಾವೆ. ಆದರೆ ಕನ್ನಡ ರಾಜ್ಯೋತ್ಸ ಕಾರ್ಯಕ್ರಮಕ್ಕೆ ಅಷ್ಟೇ ನಿಯಮಾಳಿಗಳನ್ನು ಪಾಲಿಸಬೇಕು ಎಂದು ಹೇಳುತ್ತೀರಾ ಎಂದು ತಹಶೀಲ್ದಾರ ಅವರನ್ನು ಪ್ರಶ್ನಿಸಿದರು.
ಕನ್ನಡ ರಾಜ್ಯೋತ್ಸವ ಪ್ರತಿ ವರ್ಷವು ನಡೆದುಕೊಂಡ ಬಂದಿರುವ ಕಾರ್ಯಕ್ರಮ. ಇದೊಂದು ಜಾತ್ಯಾತೀತವಾದ ಕನ್ನಡ ಸಂಘಟನೆಯಾಗಿದ್ದು. ಅದಕ್ಕೆ ತಾವುಗಳು ಪರವಾಣಿಗೆಯನ್ನು ನೀಡಬೇಕು. ಜಿಲ್ಲಾಡಳಿತ, ತಾಲೂಕಾಡಳಿತ ಪ್ರಕಾರ ಆಚರಣಿಯನ್ನು ಮಾಡುತ್ತೇವೆ ಎಂದರು.
ಭೂವನೇಶ್ವರಿ ಅವರ ಭಾವಚಿತ್ರದ ಮೆರವಣಿಗೆ ಕುರಿತು ನಮ್ಮಗೆ ಸ್ವಲ್ಪ ಕಾಲಾವಕಾಶವನ್ನು ನೀಡಬೇಕು. ಅಷ್ಟರಲ್ಲಿ ತಮ್ಮಗೆ ಮೆರವಣಿಗೆಯ ಬಗ್ಗೆ ತಿಳಿಸುತ್ತೇನೆ. ಇದು ಕನ್ನಡ ನಾಡು, ಇದೊಂದು ಜಾತ್ಯಾತೀತವಾಗಿದ್ದು. ಅದಕ್ಕೆ ಪರವಾಣಿಗೆ ಬಗ್ಗೆ ಚರ್ಚಿಸಿ ತಿಳಿಸುತ್ತೇನೆ. ಉಳಿದ ಎಲ್ಲವೂ ಕಾರ್ಯಕ್ರಮಗಳನ್ನು ತಾವು ಮಾಡಬಹುದು ಎಂದು ತಹಶೀಲ್ದಾರ ಹೇಳಿದರು.
ಪ್ರತಿ ವರ್ಷದಂತೆ ನಮ್ಮಗೆ ಎಲ್ಲವನ್ನು ಅನೂಕುಲ ಮಾಡಿಕೊಡಬೇಕು ಎಂದು ಶ್ರೀಶೈಲ ಜಂಬಗಿ ಮನವಿಯನ್ನು ಮಾಡಿಕೊಂಡರು. ನಮ್ಮ ಕನ್ನಡ ಸಂಘಕ್ಕೆ ಪೂರ್ವಭಾವಿ ಸಭೆಯ ಕುರಿತು ಯಾವುದೇ ಮಾಹಿತಿಯನ್ನು ತಾಲೂಕಾಡಳಿತ ನೀಡುತ್ತಿಲ್ಲ ಎಂದರು.
ಪ್ರತಿ ವರ್ಷ ಹೇಗೆ ಆಚರಿಸಿಕೊಂಡು ಬಂದಿದೆ ಹಾಗೆ ಈ ವರ್ಷವೂ ಕೂಡಾ ಆಚರಿಸಲಾಗುತ್ತದೆ. ಪ್ರತಿಯೊಂದು ವೃತ್ತಗಳಿಗೆ ವಿದ್ಯುತ್ದಿಂದ ದೀಪಾ ಅಲಂಕಾರವನ್ನು ನಗರಸಭೆ ಅಧಿಕಾರಿಗಳು ಮಾಡಬೇಕು ಎಂದು ಅಧಿಕಾರಿಗಳಿಗೆ ತಹಶೀಲ್ದಾರ ಸೂಚಿಸಿದರು. ನಗರದ ಹೊಕ್ಕಳ ಬಾವಿಯಲ್ಲಿ ಭೂವನೇಶ್ವರಿ ಪೋಟೋ ಪೂಜೆಯನ್ನು ಮಾಡಿದ ನಂತರ ಧ್ವಜಾರೋಹಣ, ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಂದ ನಾಡಗೀತೆ, ರೈತಗೀತೆ, ಸ್ವಾಗತ, ಪ್ರಾಸ್ತಾವಿಕ, ಮಾಲಾರ್ಪಣೆ, ಅಥಿತಿಗಳ ಭಾಷಣ, ಅಧ್ಯಕ್ಷರ ಭಾಷಣ ಕೊನೆಯದಾಗಿ ಶಿಕ್ಷಣ ಇಲಾಖೆಯಿಂದ ವಂದನಾರ್ಪನೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷ ಯಮನೂರ ಮೂಲಂಗಿ, ಬಸವರಾಜ ಬಳಗಾರ, ರವಿ ತೇಲಿ ಮತ್ತು ತಾಲೂಕಾಡಳಿತ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದರು.
ನಗರದ ಮಿನಿ ವಿಧಾನ ಸೌಧದಲ್ಲಿನ ಸಭಾ ಭವನದಲ್ಲಿ ನಡೆದ ಕನ್ನಡರಾಜ್ಯೋತ್ಸೋವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿದರು ಕನ್ನಡ ಸಂಘದ ಪದಾಧಿಕಾರಿಗಳು ಇದ್ದರು.