ಆರ್ಎಸ್ಎಸ್ ಎಂದರೆ ಕೇವಲ ಒಂದು ಸಂಘಟನೆಯಲ್ಲ, ಕುಟುಂಬ.ಇದರಲ್ಲಿ ಲಕ್ಷಕ್ಕೂ ಅಧಿಕ ಶಾಖೆಗಳು, 15 ಕೋಟಿಗೂ ಮಿಕ್ಕಿ ಸ್ವಯಂಸೇವಕರು, 2 ಲಕ್ಷ ಸರಸ್ವತಿ ವಿದ್ಯಾಮಂದಿರ, 5 ಲಕ್ಷ ಅಧ್ಯಾಪಕರು, 1 ಕೋಟಿ ವಿದ್ಯಾರ್ಥಿಗಳು, 2 ಕೋಟಿ ಭಾರತೀಯ ಕಾರ್ಮಿಕ ಸಂಘದ ಸದಸ್ಯರು, 1 ಕೋಟಿ ಎಬಿವಿಪಿ ಕಾರ್ಯಕರ್ತರು, 15 ಕೋಟಿ ಬಿಜೆಪಿ ಸದಸ್ಯರು, 1200 ಪ್ರಕಾಶನಗಳು ಮತ್ತು 17 ಲಕ್ಷ ಪೂರ್ವ ಸೈನಿಕ ಪರಿಷತ್ತುಗಳು. ಪ್ರಪಂಚದೆಲ್ಲೆಡೆ 1 ಕೋಟಿ ವಿಶ್ವ ಹಿಂದೂ ಪರಿಷತ್ ಸದಸ್ಯರು, 30 ಲಕ್ಷ ಬಜರಂಗದಳದ ಹಿಂದೂ ಕಾರ್ಯಕರ್ತರುಗಳು ಇದ್ದಾರೆ. ಭಾರತೀಯ ವನವಾಸಿ ಕಲ್ಯಾಣ ಆಶ್ರಮ, ವನಬಂಧು ಪರಿಷತ್, ಸಂಸ್ಕಾರ ಭಾರತಿ, ವಿಜ್ಞಾನ ಭಾರತಿ, ಲಘು ಉದ್ಯೋಗ ಭಾರತಿ, ಸೇವಾ ಸಹಯೋಗ, ಸೇವಾ ಇಂಟರ್ನ್ಯಾಷಿನಲ್, ರಾಷ್ಟ್ರ ಸೇವಿಕಾ ಸಮಿತಿ, ಆರೋಗ್ಯ ಭಾರತಿ, ಸಾಮಾಜಿಕ ಸಾಮರಸ್ಯ ವೇದಿಕೆ, ಮುಸ್ಲಿಂ ರಾಷ್ಟ್ರೀಯ ವೇದಿಕೆ, ಅನುಸೂಚಿತ್ ಜಾತಿ-ಜನಜಾತಿ ರಕ್ಷಣಾ ವೇದಿಕೆ, ರಾಮಜನ್ಮಭೂಮಿ ಮಂದಿರ ನಿರ್ಮಾಣ ಸಂಘ, ದೀನ್ ದಯಾಳ್ ಶೋಧ ಕೇಂದ್ರ, ಭಾರತೀಯ ವಿಚಾರ ಸಾಧನ, ಭಾರತ್ ವಿಕಾಸ್ ಪರಿಷತ್, ಜೆ.ಕೆ.ಎಸ್.ಸಿ, ದೃಷ್ಟಿ ಸಂಸ್ಥಾನ, ಹಿಂದೂ ಸಹಾಯವಾಣಿ, ಹಿಂದೂ ಸ್ವಯಂಸೇವಕ ಸಂಘ, ಹಿಂದೂ ಮುನ್ನಾನಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಭಾರತೀಯ ಕಿಸಾನ್ ಸಂಘ, ವಿವೇಕಾನಂದ ಕೇಂದ್ರ, ತರುಣ ಭಾರತ, ಅಖಿಲ ಭಾರತೀಯ ಗ್ರಾಹಕರ ವೇದಿಕೆ, ಹಿಂದುಸ್ತಾನ್ ಸಮಾಚಾರ, ವಿಶ್ವ ಸಂವಾದ ಕೇಂದ್ರ, ರಕ್ತ ನಿಧಿ, ಭಾರತೀಯ ಇತಿಹಾಸ ಸಂಕಲನ ಸಮಿತಿ, ಏಕಲ ವಿದ್ಯಾಲಯ, ಧರ್ಮ ಜಾಗರಣ ವೇದಿಕೆ, ಭಾರತ್- ಭಾರತೀ, ಸಾವರ್ಕರ್ ಭವನ, ಶಿವಾಜಿ ಅಭ್ಯಾಸ ಕೇಂದ್ರ, ಹಿಂದೂ ಏಕತಾ ಸಂಘಟನೆ, ರಾಷ್ಟ್ರೀಯ ಸಿಖ್ ಸಂಘಟನೆ, ಸರಸ್ವತಿ ಶಿಶು ಮಂದಿರ. ಇಷ್ಟೆಲ್ಲಾ ಸೇರಿ ರೂಪುಗೊಂಡಿದೆ ವಿಶ್ವದ ಅತಿದೊಡ್ಡ ಸ್ವಯಂಸೇವಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪರಿವಾರ.ಆರ್ಎಸ್ಎಸ್ ದೇಶಕ್ಕೆ ದೇಶಭಕ್ತಐಎಎಸ್ ಐಪಿಎಸ್ ಅಧಿಕಾರಿಗಳನ್ನು ನೀಡುವುದು ಮಾತ್ರವಲ್ಲ, ದೇಶದಾದ್ಯಂತ ಸಾವಿರಾರು ಸೇವಾಕಾರ್ಯವನ್ನೂ ಮಾಡುತ್ತಿದೆ.ನಗರದಲ್ಲಿರುವ ಸ್ಲಮ್ ಗಳಲ್ಲಿ ಸೇವಾ ಭಸ್ತಿಯ ಕಾರ್ಯದಿಂದ,ಗುಡ್ಡಗಾಡು ಜನರ ತನಕವೂ ದೇಶದ ಪ್ರತಿ ಮನೆಯನ್ನೂ ಸೇವೆಯಿಂದಲೇ ತಲುಪುತ್ತಿದೆಅತಿ ವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ದೇಶದ ಜನತೆ ತತ್ತರಿಸಿದಾಗ ದೇಶದ ಮೂಲೆ ಮೂಲೆಗೆ ತೆರಳಿ ಸೇವಾ ಕಾರ್ಯ ಮಾಡಿದೆ ಆರ್ಎಸ್ಎಸ್.ಕೋವಿಡ್ ನಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವುದು, ರಕ್ತದಾನ, ಆಹಾರ ಸಾಮಗ್ರಿ ಪೂರೈಕೆಯಂತಹ ಸೇವಾ ಕಾರ್ಯ ಕೂಡ ಆರ್ಎಸ್ಎಸ್ ಮಾಡಿದೆ.ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸನಾತನ ಸಂಸ್ಕೃತಿ ಉಳಿಸಲು ಅನೇಕಾನೇಕ ಕಾರ್ಯಕ್ರಮಗಳನ್ನು ಪರಿವಾರ ಸಂಘಟನೆಗಳ ಮೂಲಕ ಮಾಡುತ್ತಿದೆ. ಸ್ವಯಂಸೇವಕ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಹಿಡಿದು ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭಾ ಅಧ್ಯಕ್ಷ, ರಾಜ್ಯಪಾಲ, ಮುಖ್ಯಮಂತ್ರಿಯಂತಹ ಸ್ಥಾನಕ್ಕೆ ಏರಿದ್ದಾನೆ.ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸನಾತನ ಸಂಸ್ಕೃತಿ ಉಳಿಸಲು ಅನೇಕಾನೇಕ ಕಾರ್ಯಕ್ರಮಗಳನ್ನು ಪರಿವಾರ ಸಂಘಟನೆಗಳ ಮೂಲಕ ಮಾಡುತ್ತಿದೆ.1962 ರ ಇಂಡೋ-ಚೀನೀ ಯುದ್ಧದ ಸಂದರ್ಭದಲ್ಲಿ ನಾಗರಿಕ ಆಡಳಿತಕ್ಕೆ ಸಹಾಯಕ್ಕಾಗಿ 1963 ರ ಗಣರಾಜ್ಯ ಪಥ ಸಂಚಾಲನಕ್ಕೆ ಅಂದಿನ ಪ್ರಧಾನಿ ನೆಹರೂರವರು ಆರ್ಎಸ್ಎಸ್ ಗೆ ಆಹ್ವಾನ ನೀಡಿದ್ದರು1971 ರ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಆರ್ಎಸ್ಎಸ್ ಅಂದಿನ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರಿಗೆ ಬೆಂಬಲಿಸಿತ್ತು ಮಾತ್ರವಲ್ಲ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಘದ ಸ್ವಯಂಸೇವಕರು ಸಹಾಯ ಮಾಡುವುದರ ಜೊತೆಗೆ ರಕ್ತದಾನದಂತಹ ಮಹತ್ಕಾರ್ಯ ಮಾಡಲು ಮುಂಚೂಣಿಯಲ್ಲಿದ್ದರು.Rashtriya Swayamsevak Sangh (RSS)