ಭಾರತೀಯ ಜನತಾ ಪಾರ್ಟಿ ಜಮಖಂಡಿ ನಗರ ಮಂಡಲ ವತಿಯಿಂದ “ಸೇವೆ ಮತ್ತು ಸಮರ್ಪಣಾ” ಅಡಿಯಲ್ಲಿ ಲಾಲ ಬಹದ್ದೂರ್ ಶಾಸ್ತ್ರಿ ಜಿ ಹಾಗೂ ಮಹಾತ್ಮ ಗಾಂಧೀಜಿ ಅವರ ಜಯಂತಿ ನಿಮಿತ್ಯ
ಮುತ್ತಿನಕಂತಿ ಮಠದ ಹಿಂದಿರುವ ಸಿಹಿನೀರಿನ ಬಾವಿ ಸ್ವಚ್ಛ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು. ನಂತರ ಖಾದಿ ಬಂಡಾರ ಕ್ಕೆ ಭೇಟಿ ನೀಡಿ ಕಾರ್ಯಕರ್ತರು ಬಟ್ಟೆಯನ್ನು ಖರೀದಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷರಾದ ಅಜಯ ಕಡಪಟ್ಟಿ , ಏಗಪ್ಪ ಸೌದಿ, ಸಿಟಿ ಉಪಾಧ್ಯಾಯ, ಶಶಿಕಾಂತ್ ವಿಶ್ವಬ್ರಾಹ್ಮಣ, ಬಸವರಾಜ್ ಬಿರಾದಾರ, ರಮೇಶ ಆಲಬಾಳ, ಮುರುಗೇಶ್ ಕಲ್ಯಾಣಶೆಟ್ಟಿ, ಕುಶಾಲ್ ವಾಗ್ಮೋರೆ, ವಿನಾಯಕ್ ಗವಳಿ, ಸುನಿಲ ಬೊವಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗೀತಾ ಸೂರ್ಯವಂಶಿ, ಮತ್ತು ಎಲ್ಲ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು….