ಬಾಗಲಕೋಟೆ : ಜಮಖಂಡಿ ನಗರದ ಶ್ರಿ ಮಲ್ಲಿಕಾರ್ಜುನ ಗಜಾನನ ಯುವಕ ಮಿತ್ರ ಮಂಡಳಿಯ ನೇತೃತ್ವದಲ್ಲಿ ಹಾಗೂ ಶ್ರಿ ಗಜಾನನ ಮಹಾಮಂಡಳ ಸಹಯೋಗದೊಂದಿಗೆ ಗಣೇಶೊತ್ಸವ ನಿಮಿತ್ಯ ಶ್ರಿ ಮಲ್ಲಿಕಾರ್ಜುನ ಗಲ್ಲಿಯಲ್ಲಿ ಕೊರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಮುಖ್ಯ ಸಾನಿಧ್ಯವನ್ನು ಮುತ್ತಿನಕಾಂತಿ ಮಠದ ಷ.ಬ್ರ ಶ್ರಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರದ ಪಿ.ಎಸ್.ಐ ಸಾಹೇಬರು, ಬಿಜೆಪಿ ನಗರ ಮಂಡಳ ಅಧ್ಯಕ್ಷರಾದ ಶ್ರೀ ಅಜಯ ಕಡಪಟ್ಟಿ, ಶ್ರೀ ಗಜಾನನ ಮಹಾಮಂಡಳದ ಸಂಚಾಲಕರಾದ ಶ್ರಿ ರಾಜು ಪಾಟೀಲ ಹಾಗೂ ಮಲ್ಲಿಕಾರ್ಜುನ ಗಲ್ಲಿಯ ಯುವಕರು, ಹಿರಿಯರು ಭಾಗವಹಿಸಿದ್ದರು.