ಇಂಡೋನೇಷ್ಯಾ ಮುಸ್ಲಿಂ ರಾಷ್ಟ್ರ.ಸಾಂಸ್ಕೃತಿಕವಾಗಿ ಆ ದೇಶಭಾರತದ ಪಡಿಯಚ್ಚು.ಆ ದೇಶದ ಮೂಲ ಹೆಸರುದ್ವೀಪಾಂತರ.ಎಷ್ಟು ಸೊಗಸಾಗಿದೆಯಲ್ಲವೇ ಈ ಹೆಸರು.ಆ ದೇಶದ ಆಕಾಶವಾಣಿಯುಪ್ರತಿದಿನ ಗಾಯತ್ರಿ ಮಂತ್ರ ಹಾಗೂವೇದಘೋಷಗಳೊಂದಿಗೆಆರಂಭಗೊಳ್ಳುತ್ತದೆ.
ಆ ದೇಶದ ನೃತ್ಯ ಪ್ರಕಾರ,ಅದರಲ್ಲಿಯೂ ಜಾನಪದನೃತ್ಯಗಳು ರಾಮಾಯಣ ಮತ್ತುಮಹಾಭಾರತವನ್ನಾಧರಿಸಿದೆ.ಆ ದೇಶದ ರಾಜ್ಯಾಂಗದಹೆಸರು ಪಂಚಶೀಲ.ಆ ದೇಶದ ಧ್ಯೇಯ ವಾಕ್ಯಧರ್ಮೋ ರಕ್ಷತಿ ರಕ್ಷತಃ.ನಮ್ಮದು ಇಂಡಿಯನ್ಏರ್ ಲೈನ್ಸ್ ಆದರೆ ಅವರದುಗರುಡ ಏರ್ ಲೈನ್ಸ್.ನಮ್ಮ ಪೊಲೀಸ್ ಬೆಲ್ಟ್ ನಲ್ಲಿರುವಲಾಂಛನ ಗಂಡಭೇರುಂಡವಾದರೆಅವರ ಪೊಲೀಸ್ ಬೆಲ್ಟ್ ನಲ್ಲಿಕಂಡುಬರುವುದು ಹನುಮಂತ.
ಆ ದೇಶದ ನೋಟುಗಳಲ್ಲಿಗಣೇಶನ ಚಿತ್ರ ಪ್ರಕಟಗೊಂಡರೂಅವರ ಇಸ್ಲಾಂ ಚಿಂತನೆಗೆ ಅದುವಿರೋಧ ಎನಿಸಿಲ್ಲ.ಅಲ್ಲಿನ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಸರಸ್ವತಿಯ ಭವ್ಯವಿಗ್ರಹವಿದೆ.ಆ ದೇಶ ಎರಡನೇ ಜಾಗತಿಕಯುದ್ಧದ ನಂತರ 17-8-1945ರಂದು ಡಚ್ಚರ ಆಡಳಿತದಿಂದಸ್ವತಂತ್ರವಾಯಿತು.
ಆ ದೇಶದ ಮೊದಲ ಅಧ್ಯಕ್ಷರಾದಡಾ.ಸುಕರ್ಣೋ 1945 ರಿಂದ1967 ವರೆಗೆ ಅಧಿಕಾರದಲ್ಲಿದ್ದರು.26-1-1950 ರಂದು ನಡೆದ ಭಾರತದ ಮೊದಲಗಣರಾಜ್ಯೋತ್ಸವಸಮಾರಂಭದಅತಿಥಿಯಾಗಿಯೂ ಸುಕರ್ಣೋಭಾಗವಹಿಸಿದ್ದರು.
ಈತ ಮುಸ್ಲಿಂ.ಈತನ ತಂದೆಗೆಮಹಾಭಾರತದ ಕರ್ಣನ ಪಾತ್ರಅಚ್ಚುಮೆಚ್ಚಂತೆ.ಕರ್ಣನು ಕೌರವರಪಕ್ಷ ವಹಿಸಿದನಾದ್ದರಿಂದ ತನ್ನ ಮಗಒಳ್ಳೆಯ ಕರ್ಣನಾಗಬೇಕೆಂದುಮಗನಿಗಿಟ್ಟ ಹೆಸರು “ಸು”ಕರ್ಣೋ.ಎಂತಹ ಸುಂದರ ಚಿಂತನೆ.ಸುಕರ್ಣೋ ಹೆಂಡತಿಯ ಹೆಸರುರತ್ನಸಾರಿಕಾದೇವಿ.
ಸುಕರ್ಣೋ=ರತ್ನಸಾರಿಕಾದೇವಿದಂಪತಿಗಳ ಮಗಳ ಹೆಸರುಮೇಘಾವತಿ.ಆ ದೇಶದ 5 ನೇ ಅಧ್ಯಕ್ಷರಾಗಿ 2001 ರಿಂದ 2004ವರೆಗೆ ಸೇವೆ ಸಲ್ಲಿಸಿದ ಮೇಘಾವತಿಇಂಡೋನೇಷ್ಯಾದ ಪ್ರಥಮಮಹಿಳಾ ಅಧ್ಯಕ್ಷರೆನಿಸಿದಹೆಗ್ಗಳಿಕೆಗೂ ಪಾತ್ರರಾದರು.ಆ ದೇಶದ ಮುಸಲ್ಮಾನರನ್ನುಅವರ ಈ ಹಿಂದೂ ನಂಬಿಕೆಗಳಬಗ್ಗೆ ವಿಚಾರಿಸಿದರೆ ಅವರುಕೊಡುವ ಉತ್ತರ ಬಹಳಸ್ವಾರಸ್ಯಕರ.
“ನಾವು ಬದಲಿಸಿದ್ದು ನಮ್ಮನಂಬಿಕೆಗಳನ್ನೇ ಹೊರತು ನಮ್ಮಪೂರ್ವಜರನ್ನಲ್ಲ!”ಸಾಮರಸ್ಯಕ್ಕೆ ಇದಕ್ಕಿಂತಉದಾಹರಣೆ ಬೇಕೆ?ಇಂಡೋನೇಷ್ಯಾದ ಪ್ರತೀ ಅಂಗಡಿಮುಂಗಟ್ಟುಗಳಲ್ಲಿ,ಹೊಟೇಲುಗಳಲ್ಲಿ ಹನುಮಂತಹಾಗೂ ಗಣೇಶನ ವಿಗ್ರಹಗಳನ್ನು,ಫೋಟೊಗಳನ್ನುಕಾಣಬಹುದಾಗಿದೆ.ಆ ದೇಶದ ಜನರಿಗೆ ಶ್ರೀರಾಮಆದರ್ಶ ಪುರುಷ.ರಾಮಾಯಣಮಹಾಭಾರತಗಳು ನಮ್ಮನೆಲದಲ್ಲೇ ನಡೆದದ್ದು ಎಂದುಅಲ್ಲಿನ ಜನ ಹೆಮ್ಮೆಯಿಂದಹೇಳುತ್ತಾರೆ.ಆದರೆ ಬಹುಸಂಖ್ಯಾತ ಹಿಂದೂಗಳಜಾತ್ಯಾತೀತ ಭಾರತದಲ್ಲಿ ರಾಮನಅಸ್ತಿತ್ವವನ್ನು ಪ್ರಶ್ನಿಸಲಾಗುತ್ತದೆ!ಆ ಮರ್ಯಾದಾಪುರುಷೋತ್ತಮನಜನ್ಮದಿನಾಂಕವನ್ನು ಪ್ರಶ್ನಿಸುವಮಹಾನುಭಾವರಿದ್ದಾರೆ ಇಲ್ಲಿ!!ರಾಮಸೇತುವನ್ನು ಯಾವಇಂಜಿನಿಯರ್ ನಿರ್ಮಿಸಿದ ಎಂದುಬೊಬ್ಬಿಡುವ ಬುದ್ದಿವಂತರಿದ್ದಾರೆ ಇಲ್ಲಿ!!!
ಡಾ.ಮುರಳಿಮನೋಹರಜೋಷಿಯವರು ಮಾನವ ಸಂಪನ್ಮೂಲಸಚಿವರಾಗಿದ್ದಾಗ ರಾಜ್ಯಗಳ ಶಿಕ್ಷಣಸಚಿವರ ಸಭೆಯು ಸರಸ್ವತಿವಂದನೆಯ ಮೂಲಕ ಪ್ರಾರಂಭಗೊಂಡಾಗ ಕರ್ನಾಟಕದಸಜ್ಜನ ರಾಜಕಾರಣಿ ಎಂದೇಪ್ರಖ್ಯಾತರಾಗಿದ್ದ ಅಂದಿನ ಶಿಕ್ಷಣ ಸಚಿವಗೋವಿಂದೇಗೌಡರಾದಿಯಾಗಿಈ ನಡೆಯನ್ನು ಬಹಿಷ್ಕರಿಸಿದ್ದುದುರ್ದೈವ ಮತ್ತು ನಮ್ಮ ಸೆಕ್ಯುಲರ್ವಿಕೃತಿಗೆ ಒಂದು ಉತ್ತಮಉದಾಹರಣೆಯಷ್ಟೆ.ಪ್ರತೀ ಜೀವಿಗೆ ಆತ್ಮವಿರುವಂತೆ ಪ್ರತಿಜನಾಂಗಕ್ಕೂ ಆತ್ಮವಿದೆ.ಅದು ಆಯಾ ರಾಷ್ಟ್ರಗಳಕ್ರಿಯಾಕಲಾಪಗಳಲ್ಲಿಪ್ರಕಟಗೊಳ್ಳುತ್ತದೆ.ಈ ಹಿನ್ನೆಲೆಯಲ್ಲಿ ಧರ್ಮದ ಬಗ್ಗೆಸ್ವಾಮಿ ವಿವೇಕಾನಂದರು ಹೇಳಿದಮಾತು ಗಮನಾರ್ಹ.”ಇಂಗ್ಲೆಂಡಿನ ಆತ್ಮವ್ಯಾಪಾರವಾದರೆ,ಫ್ರಾನ್ಸ್ ನ ಆತ್ಮ ರಾಜಕಾರಣಕ್ಕೆಸಂಬಂಧಿಸಿದ್ದು,ಜಪಾನ್ ನ ಆತ್ಮಕಲೆ ಮತ್ತು ಸೌಂದರ್ಯಾರಾಧನೆಗೆಸಂಬಂಧಿಸಿದ್ದರೆ,ಇಟಲಿಯ ಆತ್ಮ ಕಾನೂನು ಮತ್ತುಶಿಸ್ತು ಪಾಲನೆಗೆಸಂಬಂಧಿಸಿದ್ದು.ಅಂತೆಯೇ ಭಾರತದ ಆತ್ಮಆಧ್ಯಾತ್ಮಕ್ಕೆ ಸಂಬಂಧಿಸಿದ್ದು,ಅರ್ಥಾತ್ ಧರ್ಮಕ್ಕೆಸಂಬಂಧಿಸಿದ್ದು.ಆದ್ದರಿಂದ ಧರ್ಮವೇ ಭಾರತದ ಉಸಿರು.
“ನಮ್ಮ ದೇಶದ ರಾಜಕಾರಣಿಗಳುಹೇಳುವ ಸೆಕ್ಯುಲರ್ ಸಿದ್ದಾಂತಜಾತಿ-ಜಾತಿಗಳ ನಡುವೆ ಸಂಘರ್ಷಮತ್ತು ಓಲೈಕೆಯ ರಾಜಕಾರಣದಅಸ್ತ್ರವಾಯಿತೇ ವಿನಃಸಾಮರಸ್ಯವನ್ನು ಮೂಡಿಸಲಿಲ್ಲ.ಭಾರತದ ಅಲ್ಪಸಂಖ್ಯಾತರಿಗೆದಕ್ಷಿಣ-ಪೂರ್ವ ದೇಶವಾಗಿರುವಇಂಡೋನೇಷ್ಯಾ ಜನರ ನಡವಳಿಕೆಉತ್ತಮ ಆದರ್ಶವಾಗಬಲ್ಲದುಎಂಬುದನ್ನು ಇಲ್ಲಿನ ಜಾತ್ಯಾತೀತಬುದ್ದಿಜೀವಿ ವರ್ಗಗಮನಿಸುವುದೊಳಿತು.ಭಾರತದ ಅಲ್ಪಸಂಖ್ಯಾತರಿಗೆಧಾರ್ಮಿಕ ಸೂಚನೆಗಳುಪಾಕಿಸ್ತಾನ, ಅಫ್ಘಾನಿಸ್ತಾನ, ಇಟಲಿ,ರೋಮ್ ಗಳಿಂದ ಬರುವುದುಸಾಧ್ಯವಾಗುವುದಾದರೆಸಾಮರಸ್ಯದ ಪಾಠದೊಂದಿಗೆಅವರ ಪೂರ್ವಜರನ್ನು ಮತ್ತು ಆನೆಲದ ಮಾನಬಿಂದುಗಳನ್ನುಗೌರವಿಸುತ್ತಾ, ಇಸ್ಲಾಂಚಿಂತನೆಗಳನ್ನುರೂಢಿಸಿಕೊಂಡಿರುವಇಂಡೋನೇಷ್ಯಾದ ಜನರ ಬದುಕಿನರೀತಿ-ನೀತಿಗಳು ಭಾರತದಅಲ್ಪಸಂಖ್ಯಾತರಿಗೆ ಆದರ್ಶಎನಿಸುವುದಿಲ್ಲವೇಕೆ?ನಮ್ಮ ನಂಬಿಕೆಗಳೇ ಶ್ರೇಷ್ಠ,ನಮ್ಮ ದೇವರೇ ಸತ್ಯ ಎಂಬನಮ್ಮ ಅಭಿಪ್ರಾಯಗಳು ನಮ್ಮನ್ನುಮತಾಂಧರನ್ನಾಗಿಸುತ್ತವೆಯೇಹೊರತು ಕೂಡಿ ಬಾಳುವುದನ್ನುಕಲಿಸಲಿಲ್ಲ.ಸ್ನೇಹಿತರೇ,ಅಫ್ಘಾನಿಸ್ತಾನದಲ್ಲಿ ಕೆಲವುದಿನಗಳಿಂದ ನಡೆಯುತ್ತಿರುವಮನಕಲಕುವ ಘಟನಾವಳಿಗಳುಈ ಲೇಖನಕ್ಕೆ ಇಂಬು ನೀಡಿದೆ.